Saturday 15 August 2009

ಹಿತ ಚಾರಣ

ಧರ್ಮ ನಿರ್ಣಯ ಜನ್ಮ ಜನ್ಮಾಂತರದ ಕರ್ಮ
ಧರ್ಮದ ಹೆಸರಿನಲೆ ಅಧರ್ಮವ ಗಣಿಸಿದರೆ
ಮಿಕ್ಕೆಲ್ಲ ಜಗವು ನಿನ್ನನು ಒತ್ತಟ್ಟಿಗಿಡುವುದು
ಅದನ್ನು ಸಾಧಿಪ ವಿಜಯವೆಂದು ತಿಳಿಯದಿರು ಮರುಳೆ !

ಜಗಕೆ ಬೇಕು ಸಂತಸ , ಬೇಡ ಸಂತಾಪ,
ಅದನರಿತು ಸರ್ವಹಿತ ಜೀವನಧರ್ಮವ ಧರಿಸಿ,
ಲೋಕದ ಸನ್ಮಾರ್ಗದ ಬದುಕಿನ ಹಿತಚಾರಣಕೆ
ಎಲ್ಲರೂ ಸಂಭ್ರಮದಿ ನೆರವಾಗಲೇ ಬೇಕು ಶಾಂತಿ ಪಯಣಕೆ !

ಮನುಜ ಜೀವಿತವೆಲ್ಲ ಧ್ವನಿಗೆ ಪ್ರತಿಧ್ವನಿಯಂತಿರಲಿ,
ಭಯೋತ್ಪಾದಕರು ಉತ್ಪಾದಿಸುವ ಜೀವ ಭಯ ದೂರವಾಗಲಿ,
ಕದನವ ತೆರೆದೆ ಬದುಕು ಸಾಗದೆ ಚಿರವಿವೇಕದಿ;
ಬೆಳೆದು ನಲುಮೆಯಿಂದ ಧೃತಿ ತಳೆದು ಇಳೆಯುಳಿಸಿ !
- ಬಿ. ಎಂ. ಮಂಜುಳ
ಶಿಕ್ಷಕಿ